Goa
ಭಾರತದ ನಂಬರ್ 1 ಪಾರ್ಟಿ ಪ್ಲೇಸ್ ಯಾವುದೆಂದರೆ ಎಲ್ಲರೂ ನೀಡುವ ಉತ್ತರ ಗೋವಾ. ದಕ್ಷಿಣ ಭಾರತ, ಉತ್ತರ ಭಾರತ ಎಲ್ಲೆಡೆಯಿಂದ ಜನ ಗೋವಾಕ್ಕೆ ಪಾರ್ಟಿ ಮಾಡಲು ಬರುತ್ತಾರೆ. ದಶಕಗಳಿಂದಲೂ ಗೋವಾ ಭಾರತದ ಪಾರ್ಟಿ ಪ್ಲೇಸ್ ಆಗಿದೆ. ಇಲ್ಲಿನ ಸುಂದರ ಬೀಚುಗಳು, ಕಡಿಮೆ ದರದ ಮಧ್ಯ, ಪೋರ್ಚುಗೀಸರು ಬಿಟ್ಟು ಹೋಗಿರುವ ಸುಂದರ ನಗರ ಪ್ರವಾಸಿಗರನ್ನು ಸೆಳೆಯುತ್ತಲೇ ಬಂದಿತ್ತು. ಆದರೆ ಈ ಬಾರಿ ಹೊಸ ವರ್ಷಕ್ಕೆ ಗೋವಾ ಖಾಲಿ ಆಗಿತ್ತು. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ 50% ಪ್ರವಾಸಿಗರ ಕೊರತೆಯನ್ನು ಗೋವಾ ಅನುಭವಿಸಿದೆ.
ಪ್ರತಿ ವರ್ಷ ಹೊಸ ವರ್ಷಕ್ಕೆ ತಿಂಗಳ ಮುಂಚೆಯೇ ಗೋವಾದ ಹೋಟೆಲ್’ಗಳು ತುಂಬಿ ಹೋಗಿರುತ್ತಿದ್ದವು. ಬೀಚ್’ಗಳಲ್ಲಿ ಪಾರ್ಟಿಗಳು ನಡೆಯುತ್ತಿದ್ದವು. ಪಣಜಿಯ ರಸ್ತೆಗಳಲ್ಲಿ ಜನ ಗಿಜಿ ಗುಡುತ್ತಿದ್ದರು. ಆದರೆ ಈ ಬಾರಿ ಅದ್ಯಾವುದೂ ಇಲ್ಲ. ಡಿಸೆಂಬರ್ 31 ರ ರಾತ್ರಿ ಸಹ ಗೋವಾದ ಬೀಚ್ ಗಳು ಖಾಲಿ ಹೊಡೆಯುತ್ತಿದ್ದವು. ಎಷ್ಟೋ ಪಬ್ ಗಳಲ್ಲಿ ಬೆರಳೆಣಿಕೆಯ ಜನ ಮಾತ್ರವೇ ಇದ್ದರು. ಪ್ರವಾಸದ ಮೇಲೆಯೇ ನಿರ್ಭರ ಆಗಿರುವ ಗೋವಾದ ಆದಾಯ ಈ ಬಾರಿ ಕನಿಷ್ಟ 50% ಹೊಡೆತ ತಿಂದಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನೂ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಏನು? ಕಾರಣ ಯಾರು?
ಪ್ರವಾಸಿಗರು ಗೋವಾದ ಬಗ್ಗೆ ಆಸಕ್ತಿ ಕಳೆದುಕೊಳ್ಳಲು ಸ್ವತಃ ಗೋವಾದ ಜನ, ವಿಶೇಷವಾಗಿ ಗೋವಾದ ಸ್ಥಳೀಯ ವ್ಯಾಪಾರಿಗಳೇ ಕಾರಣ ಎನ್ನಲಾಗುತ್ತಿದೆ. ಗೋವಾದವರಿಗೆ ಅತಿಥಿ ದೇವೋಭವದ ಅರ್ಥವೇ ಗೊತ್ತಿಲ್ಲ, ಗ್ರಾಹಕರನ್ನು ಅವರು ಗೌರವದಿಂದ ಕಂಡಿದ್ದೆ ಇಲ್ಲ. ಹೊರಗಿನಿಂದ ಬಂದವರನ್ನು ಅತ್ಯಂತ ನಿಷ್ಕೃಷ್ಟವಾಗಿ ನೋಡುವ ಅವರ ಗುಣವೇ ಗೋವಾದ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಗೋವಾದ ಇಂದಿನ ಸ್ಥಿತಿಗೆ ಇನ್ನೊಂದು ಪ್ರಮುಖ ಕಾರಣ ಅಲ್ಲಿನ ಸ್ಕ್ಯಾಮ್’ಗಳು. ಗೋವಾದ ಬೀಚ್’ಗಳಲ್ಲಿ ನಡೆಯುವ ಸ್ಕ್ಯಾಮ್ ಗಳು ಭಾರತದ ಇನ್ನೆಲ್ಲಿಯೂ ನಡೆಯುವುದಿಲ್ಲ. ಗ್ಯಾಂಬ್ಲಿಗ್ ಹೆಸರಲ್ಲಿ ಸ್ಕ್ಯಾಮ್, ಮಸಾಜ್ ಹೆಸರಲ್ಲಿ ಸ್ಕ್ಯಾಮ್, ಯುವಕರನ್ನು ಟಾರ್ಗೆಟ್ ಮಾಡಿಕೊಂಡು ಗುಂಪುಗಳಲ್ಲಿ ದಾಳಿ ಮಾಡುವ ಈ ಸ್ಕ್ಯಾಮರ್ಸ್ ಗಳು ಎಷ್ಟೋ ಜನ ಪ್ರವಾಸಿಗರಿಂದ ಬೆದರಿಸಿ ಹಣ ಪೀಕಿಸಿದ್ದಾರೆ.
ಬೆಲೆ ಏರಿಕೆ ಸಹ ಗೋವಾದ ಬಹಳ ದೊಡ್ಡ ಸ್ಕ್ಯಾಮ್. ಗೋವಾನಲ್ಲಿ ಮದ್ಯದ ಹೊರತಾಗಿ ಇನ್ನೆಲ್ಲವೂ ದುಬಾರಿಯೇ. ಹೋಟೆಲ್ ರೂಮುಗಳ ಬೆಲೆ ಗಗನದಲ್ಲಿವೆ. ಊಟದ ಬೆಲೆಯಂತೂ ವಿಪರೀತ ಎನ್ನುವಷ್ಟು ಹೆಚ್ಚು. ಬೀಚ್ ನಲ್ಲಿ ಒಂದು ಸಣ್ಣ ಗೋಬಿ ತಿನ್ನಬೇಕೆಂದರೂ 200 ರಿಂದ 300 ರೂಪಾಯಿ ಕೊಡಬೇಕು. ಹೊಸ ವರ್ಷದಲ್ಲಿ ಈ ಬೆಲೆ ಎರಡು ಪಟ್ಟಾಗುತ್ತದೆ.
Freebies: 36 ವರ್ಷದಿಂದ ಉಚಿತ ಕೂಪನ್ ಕೋಡ್ ಮೂಲಕ ಜೀವನ ನಡೆಸುತ್ತಿದ್ದಾನೆ ಈ ಕೋಟ್ಯಧೀಶ್ವರ
ಗೋವಾದ ಇಂದಿನ ಸ್ಥಿತಿಗೆ ಸರ್ಕಾರವೂ ಪರೋಕ್ಷ ಕಾರಣ. ಪ್ರವಾಸದ ಮೇಲೆ ನಿರ್ಭರವಾಗಿರುವ ಗೋವಾ, ಪ್ರವಾಸಿಗರ ಸುರಕ್ಷತೆಗೆ ಏನೇನೂ ಕೆಲಸ ಮಾಡಿಲ್ಲ. ಪ್ರವಾಸಿಗರಿಗಿಂತಲೂ ಮೋಸಗಾರ ವ್ಯಾಪಾರಿ ಬೆಂಬಲಕ್ಕೆ ಅದು ನಿಂತಿದೆ. ಗೋವಾದ ಪೊಲೀಸರು, ಸ್ಥಳೀಯರ ಮೇಲೆ ಪ್ರವಾಸಿಗರು ನೀಡಿದ ದೂರು ಸಹ ಸ್ವೀಕಾರ ಮಾಡುವುದಿಲ್ಲ ಎಂದು ಹಿಂದೆ ಕೆಲವರು ಫೇಸ್ ಬುಕ್’ನಲ್ಲಿ ಬರೆದುಕೊಂಡಿದ್ದು ವರದಿ ಆಗಿತ್ತು. ಏನೇ ಆಗಲಿ, ಗೋವಾ ತನ್ನ ಹಳೆಯ ಹೊಳಪನ್ನು ಕಳೆದುಕೊಂಡಿದೆ. ಇದರ ಸದುಪಯೋಗವನ್ನು ಕರ್ನಾಟಕದ ಕರಾವಳಿ ಪ್ರದೇಶಗಳು ಪಡೆದುಕೊಳ್ಳಬಹುದಾಗಿದೆ.