Bengaluru
‘ಕೊಟ್ಟರೆ ಕೊಡು ದೇವರೆ ಕುಡುಕನಲ್ಲದ ಗಂಡನ’ ಎಂದು ದೂರದರ್ಶನದಲ್ಲಿ ಹಿಂದೊಂದು ಸಾರ್ವಜನಿಕ ಹಿತಾಸಕ್ತಿ ಜಾಹೀರಾತು ಬರುತ್ತಿತ್ತು. ಆದರೆ ಇತ್ತೀಚೆಗೆ ಮದುವೆಗಳೆಂದರೆ ಅಲ್ಲಿ ಕುಡಿತ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಆದರೆ ಇದೀಗ ಬೆಂಗಳೂರಿನಲ್ಲಿ ಘಟನೆಯೊಂದು ನಡೆದಿದೆ. ತನ್ನ ಮದುವೆಗೆ ಕುಡಿದು ಬಂದನೆಂಬ ಕಾರಣಕ್ಕೆ ವಧುವಿನ ಕಡೆಯವರು ಮದುವೆಯನ್ನೇ ರದ್ದು ಮಾಡಿದ್ದಾರೆ.
ಘಟನೆ ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ನಡೆದಿದ್ದು. ಉತ್ತರ ಭಾರತೀಯ ಸಮುದಾಯದ ಮದುವೆ ಅದಾಗಿತ್ತು. ತನ್ನದೇ ಮದುವೆಗೆ ಕುಡಿದು ಬಂದಿದ್ದ ವರ ಮತ್ತು ಅವನ ಗೆಳೆಯರು ಕಲ್ಯಾಣ ಮಂಟಪದಲ್ಲಿ ಗಲಾಟೆ ಎಬ್ಬಿಸಿದ್ದಾರೆ. ಮದುವೆ ಕಾರ್ಯಕ್ರಮ ನಡೆಯುವಾಗಲೂ ಗದ್ದಲ ಎಬ್ಬಿಸಿದ್ದಲ್ಲದೆ ಮದುವೆಯ ಶಾಸ್ತ್ರಗಳನ್ನು ಗೇಲಿ ಮಾಡಿದ್ದಾರೆ. ಮದುವೆಗೆ ಬಂದವರ ಬಳಿಯೂ ಕೆಟ್ಟದಾಗಿ ಮಡೆದುಕೊಂಡಿದ್ದಾರೆ.
ಇದನ್ನು ಕಂಡು ಕೋಪಗೊಂಡು ಹೆಣ್ಣಿನ ಕಡೆಯವರು ಮದುವೆನ್ನೇ ರದ್ದು ಮಾಡಿದ್ದಾರೆ. ವಧುವಿನ ತಾಯಿ, ವರನ ಕಡೆಯವರನ್ನು ಮಂಟಪದಿಂದ ಹೊರಗೆ ಹೋಗುತ್ತಿರುವಂತೆ ಕೇಳುತ್ತಿರುವ ದೃಶ್ಯದ ವಿಡಿಯೋ ಇದೀಗ ವೈರಲ್ ಆಗಿದೆ. ‘ಅವನಿಗೆ (ವರ) ಈಗಲೇ ಇಷ್ಟು ದುರಹಂಕಾರ ಇದೆ, ಇನ್ನು ಅವನು ನನ್ನ ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಾನಾ?) ಎಂದು ತಾಯಿ ವರನ ಕಡೆಯವರನ್ನು ಕೇಳಿ, ನೀವು ಈಗಲೇ ಇಲ್ಲಿಂದ ತೆರಳಿ ಎಂದು ಕೈ ಮುಗಿಯುತ್ತಿರುವ ದೃಶ್ಯ ವೈರಲ್ ಆಗಿರುವ ವಿಡಿಯೋನಲ್ಲಿದೆ.
Beer: ಮತ್ತೆ ಮದ್ಯ ಪ್ರಿಯರ ಜೇಬಿಗೆ ಕೈಹಾಕಿದ ಸರ್ಕಾರ, ಈ ಬಾರಿ ಎಷ್ಟು ಹೆಚ್ಚಳ?
ಆ ತಾಯಿಯ ಧೈರ್ಯವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಅಂಥಹಾ ಸಮಯದಲ್ಲಿ ಇಂಥಹಾ ನಿರ್ಣಯ ತೆಗೆದುಕೊಳ್ಳಲು ಧೈರ್ಯ ಬೇಕು. ಮದುವೆಗೆ ಮಾಡೊರುವ ಖರ್ಚು, ಸಂಬಂಧಿಗಳು ಏನನ್ನುತ್ತಾರೋ ಎಂಬುದನ್ನೆಲ್ಲ ಬದಿಗಿಟ್ಟು ಆ ಮಹಿಳೆ ತನ್ನ ಮಗಳ ಭವಿಷ್ಯಕ್ಕಾಗಿ ಇಂಥಹಾ ಗಟ್ಟಿ ನಿರ್ಣಯ ಮಾಡಿದ್ದಾಳೆ. ಎಲ್ಲ ಹೆಣ್ಣು ಮಕ್ಕಳ ಕುಟುಂಬದವರು ಈ ರೀತಿಯ ಗಟ್ಟಿ ನಿರ್ಣಯ ಮಾಡಬೇಕು ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ವಧು ಒಬ್ಬಾಕೆ, ವರ ತಡವಾಗಿ ಬಂದ ಎಂಬ ಕಾರಣಕ್ಕೆ ಮದುವೆಯನ್ನೇ ರದ್ದು ಮಾಡಿದ್ದು ಕೆಲ ದಿನಗಳ ಹಿಂದೆಯಷ್ಟೆ ವರದಿ ಆಗಿತ್ತು.