Dharmasthala: ಧರ್ಮಸ್ಥಳದ ಬಗ್ಗೆ ಹರಿದಾಡುತ್ತಿರುವ ವಿಡಿಯೋನಲ್ಲಿ ಸತ್ಯ ಎಷ್ಟಿದೆ?

0
52
Dharmasthala

Dharmasthala

ಯೂಟ್ಯೂಬ್ ನಲ್ಲಿ ಆಹಾಕಾರ ಎದ್ದಿದೆ. ಯುವಕನೊಬ್ಬ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳದ ಬಗ್ಗೆ, ಆ ಸ್ಥಳದಲ್ಲಿ ನಡೆದ ಸೌಜನ್ಯ ಎಂಬ ಹೆಣ್ಣು ಮಗಳೊಬ್ಬಳ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ವಿಡಿಯೋ ಮಾಡಿದ್ದಾನೆ. ಆ ವಿಡಿಯೋ ಕೇವಲ ಮೂರು ದಿನದಲ್ಲಿ ಒಂದು ಕೋಟಿ ವೀವ್ಸ್ ಪಡೆದುಕೊಂಡಿದೆ. ಕೇವಲ ನಾಲ್ಕೇ ದಿನಕ್ಕೆ ಆ ಯುವಕನಿಗೆ 5 ಲಕ್ಷಕ್ಕೂ ಹೆಚ್ಚು ಸಬ್ ಸ್ಕ್ರೈಬರ್ ಗಳು ದೊರೆತಿದ್ದಾರೆ. ವಿಡಿಯೋ ಏನೋ ವೈರಲ್ ಆಗಿದೆ ಆದರೆ ಆ ಯುವಕ ವಿಡಿಯೋನಲ್ಲಿ ಹೇಳಿರುವ ವಿಷಯಗಳಲ್ಲಿ ಸತ್ಯಾಂಶ ಎಷ್ಟಿದೆ?

ಸಮೀರ್ ಮೊಹಮ್ಮದ್ ಎಂಬ ಯುವಕ ತನ್ನ ಧೂತ ಸಮೀರ್ ಎಂಡಿ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಧರ್ಮಸ್ಥಳದ ಬಗ್ಗೆ ಅಲ್ಲಿನ ಧರ್ಮಾಧಿಕಾರಿಗಳ ಬಗ್ಗೆ (ನೇರವಾಗಿ ಹೆಸರು, ಧರ್ಮ ಹೇಳದೆ) ವಿಡಿಯೋ ಮಾಡಿದ್ದಾನೆ. ಸೌಜನ್ಯ ಕೊಲೆ ಪ್ರಕರಣದ ವಿಷಯದ ಜೊತೆಗೆ ಇನ್ನೂ ಕೆಲವು ವಿಷಯಗಳನ್ನು ಆ ಯುವಕ ಪ್ರಸ್ತಾಪ ಮಾಡಿದ್ದಾನೆ. ಧರ್ಮಾಧಿಕಾರಿಗಳನ್ನು ಪರೋಕ್ಷವಾಗಿ ಗೌಡರು ಎಂದು ಕರೆಯುತ್ತಾ, ಸೌಜನ್ಯ ಕೊಲೆ ಪ್ರಕರಣದಲ್ಲಿ ಅವರ ಪಾತ್ರ ಇದೆ ಎನ್ನುವಂತೆ ಆರೋಪ ಮಾಡಿದ್ದಾನೆ.

ಅಸಲಿಗೆ ವಿಡಿಯೋನಲ್ಲಿ ಯುವಕ ಸಮೀರ್ ಹೇಳಿರುವ ವಿಷಯಗಳು ಯಾವುದೂ ಪೂರ್ಣವಾಗಿ ಸುಳ್ಳಲ್ಲ. ಆದರೆ ಆ ಯುವಕನಿಗೆ ಧರ್ಮಾಧಿಕಾರಿಗಳ ಬಗ್ಗೆ, ಧರ್ಮಸ್ಥಳದ ಬಗ್ಗೆ ಪೂರ್ವಾಗ್ರಹ ಇರುವುದು ಆತನ ನಿರೂಪಣೆಯಲ್ಲಿ ತಿಳಿದು ಬರುತ್ತದೆ. ಸೌಜನ್ಯ ಕೊಲೆ ಪ್ರಕರಣ, ಬಹಳ ಸಂಕೀರ್ಣವಾದ ಕಗ್ಗಂಟು, ಆ ಪ್ರಕರಣವನ್ನು ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಿಸುವುದು ಸಾಧ್ಯವಿದೆ. ಇದೇ ಕಾರಣಕ್ಕೆ ನ್ಯಾಯಾಲಯದಲ್ಲಿಯೂ ಪ್ರಕರಣಕ್ಕೆ ಪೂರ್ಣವಾಗಿ ನ್ಯಾಯ ಒದಗಿಲ್ಲ. ಆದರೆ ಆ ಪ್ರಕರಣ ಎಬ್ಬಿಸಿರುವ ಅನುಮಾನಗಳು ಒಂದೆರಡಲ್ಲ. ಇನ್ನು ಈಗ ವಿಡಿಯೋ ಮಾಡಿರುವ ಯುವಕ ಸಮೀರ್, ಈಗಾಗಲೇ ಸೌಜನ್ಯ ಪ್ರಕರಣದ ಬಗ್ಗೆ ಆನ್ ಲೈನ್ ನಲ್ಲಿ ಲಭ್ಯ ಒರುವ ಇರುವ ಮಾಹಿತಿಯನ್ನೇ ಬಳಸಿಕೊಂಡು ಅಪೀಲಿಂಗ್ ಆಗಿ ವಿಡಿಯೋ ಅನ್ನು ಪ್ರೆಸೆಂಟ್ ಮಾಡಿದ್ದು, ಕೆಲವೇ ಗಂಟೆಗಳಲ್ಲಿ ವಿಡಿಯೋ ವೈರಲ್ ಆಗಿದೆ. ಇಲ್ಲಿ ಆ ಯುವಕನ ಧೈರ್ಯಕ್ಕೂ ಮೆಚ್ಚುಗೆ ನೀಡಲೇ ಬೇಕು.

ಈಗ ಸಾಮಾಜಿಕ ಜಾಲತಾಣದಲ್ಲಿ ಆ ಯುವಕನ ಧರ್ಮವನ್ನು ಕಾರಣವಾಗಿ ಇರಿಸಿಕೊಂಡು ವಿಡಿಯೋ ಹಿಂದೆ ಷಡ್ಯಂತ್ರ ಇದೆ ಎಂಬ ಆರೋಪವನ್ನು ಮಾಡಲಾಗುತ್ತಿದೆ. ಆದರೆ ಈ ಯುವಕ ಎತ್ತಿರುವ ಅದೇ ಪ್ರಶ್ನೆಗಳನ್ನು ಕಳೆದ ಕೆಲ ವರ್ಷಗಳಿಂದ ಕೆಲ ಸಾಮಾಜಿಕ ಹೋರಾಟಗಾರರು ಎತ್ತುತ್ತಲೇ ಬಂದಿದ್ದಾರೆ. ಅದತಲ್ಲಿ ಗಿರೀಶ್ ಮಟ್ಟೆಣ್ಣವರ್ ಸಹ ಒಬ್ಬರು.

DK Shivakumar: ನಟರಿಗೆ ವಾರ್ನಿಂಗ್ ಕೊಟ್ಟಿದ್ದೇಕೆ ಡಿಕೆ ಶಿವಕುಮಾರ್, ಯಾರ ಮೇಲೆ ಕೋಪ?

ಇನ್ನು ಧರ್ಮಾಧಿಕಾರಿಗಳ ವಿಷಯಕ್ಕೆ ಬರುವುದಾದರೆ. ಸ್ವತಃ ಧರ್ಮಾಧಿಕಾರಿಗಳು ಕೆಲ ಸಂದರ್ಶನಗಳಲ್ಲಿ ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದು ಇದೆ. ‘ಖುದ್ದು ನಾನೇ ಆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯ ಮಾಡಿದ್ದೆ’ ಎಂದಿದ್ದರು, ಆ ಪ್ರಕರಣವನ್ನು ಬಳಸಿಕೊಂಡು ಧರ್ಮಸ್ಥಳಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಹ ಆರೋಪ ಮಾಡಿದ್ದರು. ನಿಜಕ್ಕೂ ಸೌಜನ್ಯ ಕೊಲೆ ಯಾರು ಮಾಡಿದ್ದು? ಎಂಬುದು ಎಂದು ಹೊರಗೆ ಬರುತ್ತದೆಯೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here