Site icon Samastha News

ಇನ್ನು ಮುಂದೆ ಹೀಗಾದರೆ….: ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ

ಪರಮಾಣು ಬ್ಲಾಕ್​ಮೇಲ್ ಸಹಿಸುವುದಿಲ್ಲ, ನಿರ್ಣಾಯಕ ಪ್ರಹಾರ, ಆತಂಕಿಗಳ ಸರ್ಕಾರ ಆತಂಕಿಗಳು ಎರಡೂ ಒಂದೇ. ವಿಶ್ವವೇ, ಪಾಕಿಸ್ತಾನದ ಕೆಟ್ಟ ಸತ್ಯವನ್ನು ನೋಡಿದೆ. ಸತ್ತ ಭಯೋತ್ಪಾದರ ವಿದಾೈನ್ಯಾಯಕ್ಕೆ ಪಾಕ್  ಸೈನ್ಯಾಧಿಕಾರಿಗಳು. ನಾವು ಬಚಾವ್ ಮಾಡುತ್ತೇವೆ. ಬೆಂಬಲ ನೀಡುತ್ತೇವೆ, ಪ್ರತಿಬಾರಿ ದೂಳುಣಿಸಿದ್ದೇವೆ, ಆಪರೇಷನ್ ಸಿಂಧೂರ್, ಮರಳುಗಾಡು, ಬೆಟ್ಟಗಳಲ್ಲಿ ಕ್ಷಮತೆ ತೋರಿಸಿದ್ದೇವೆ, ನ್ಯೂ ಏರ್ ದಾಳಿ. ಆಪರೇಷನ್​ ಇಂದಾಗಿ, ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರ ಸಾಬೀತು ಮಾಡಿದೆ. ಮೇಡ್ ಇನ್ ಇಂಡಿಯಾ ಡಿಫೆನ್ಸ್ ಎಕ್ಯುಪೆಮೆಂಟ್ಸ್, ಎಲ್ಲ ರೀತಿಯ ಆತಂಕವಾದದ ವಿರುದ್ಧ ನಾವು ಒಗ್ಗಟ್ಟಾಗಿರುವುದು ಅಗತ್ಯ. ಏಕತೆಯೇ ನಮ್ಮೆಲ್ಲರ ಶಕ್ತಿ. ನಿಶ್ಚಿತವಾಗಿ ಈ ಯುಗ ಯುದ್ಧದ್ದಲ್ಲ, ಆದರೆ ಈ ಯುಗ ಆತಂಕವಾದದ್ದು ಸಹ ಅಲ್ಲ. ಭಯೋತ್ಪಾದನೆಯ ವಿರುದ್ಧ ಜೀರೋ ಟಾಲರೆನ್ಸ್, ಒಳ್ಳೆಯ ಜಗತ್ತಿಗಾಗಿ ಇದು ಅಗತ್ಯ, ಪಾಕಿಸ್ತಾನದ ಸೈನ್ಯ, ಸರ್ಕಾರ ಆತಂಕವಾದಕ್ಕೆ ಆಹಾರ ನೀಡುತ್ತಿದೆ. ಅದು ಒಂದು ದಿನ ಪಾಕಿಸ್ತಾನವನ್ನೇ ಮುಗಿಸುತ್ತದೆ. ಪಾಕಿಸ್ತಾನವನ್ನು ಬಚಾವಾಗಲು ಭಯೋತ್ಪಾದನೆ ಹತ್ತಿಕ್ಕಬೇಕು. ಶಾಂತಿಯ ದಾರಿಯೇ ಇಲ್ಲ. ಭಾರತದ ಉದ್ದೇಶ ಸ್ಪಷ್ಟ. ಟೆರರ್ ಮತ್ತು ಟಾಕ್ ಒಂದೇ ಬಾರಿ ಆಗುವುದಿಲ್ಲ. ಟೆರರ್ ಟ್ರೇಡ್ ಒಂದೇ ಬಾರಿ ಆಗುವುದಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲ್ಲ. ವಿಶ್ವಕ್ಕೂ ಎಚ್ಚರಿಕೆ, ಘೋಷಿತ ನೀತಿ, ಪಾಕಿಸ್ತಾನದ ಜೊತೆಗೆ ಚರ್ಚೆ ಆಗುವುದಿದ್ದರೆ ಭಯೋತ್ಪಾದನೆ, ಪಿಓಕೆ ಬಗ್ಗೆಯೇ ಆಗಿರಲಿದೆ. ಇಂದು ಬುದ್ಧ ಪೂರ್ಣಿಮಾ, ಶಾಂತಿಯ ದಾರಿ ತೋರಿಸಿದ್ದಾರೆ, ಆದರೆ ಅದೂ ಸಹ ಶಕ್ತಿಯಿಂದಲೇ ಆಗುತ್ತದೆ. ಎಲ್ಲ ಭಾರತೀಯ ಶಾಂತಿಯಿಂದ ಇರಬೇಕು.ವಿಕಸತವಾಗಿರಬೇಕು, ಭಾರತ ಶಕ್ತಿಶಾಲಿ ಆಗಿರಬೇಕು. ಶಕ್ತಿಯ ಬಳಕೆಯೂ ಅಗತ್ಯ, ಕಳೆದ ಕೆಲವು ದಿನಗಳಲ್ಲಿ ಇದನ್ನೇ ಮಾಡಿದೆ ಭಾರತ, ಭಾರತೀಯ ಸೇನೆ ಮತ್ತು ಸಶಸ್ತ್ರ ಬಲಕ್ಕೆ ಸೆಲ್ಯೂಟ್, ಭಾರತದ
ಇನ್ನು ಮುಂದೆ ಹೀಗೇನಾದರೂ ಆದರೆ..: ಪಾಕ್​ಗೆ ಮೋದಿ ಎಚ್ಚಿರಿಕೆ
ನರೇಂದ್ರ ಮೋದಿ ಅವರು ಭಯೋತ್ಪಾದನೆಗೆ ಬೆಂಬಲ ನೀಡುತ್ತಾ ಬಂದಿರುವ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂದು (ಮೇ 12) ರಂದು ರಾತ್ರಿ 8 ಗಂಟೆಗೆ ಲೈವ್ ಬಂದಿದ್ದ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವ ಜೊತೆಗೆ ವಿಶ್ವದ ಇತರೆ ರಾಷ್ಟ್ರಗಳಿಗೆ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವು ಏನೆಂಬುದನ್ನು ಸಹ ಸ್ಪಷ್ಟಪಡಿಸಿದರು. ಭಯೋತ್ಪಾದನೆಗೆ ನಮ್ಮ ಉತ್ತರ ದಾಳಿಯೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದರು ಮೋದಿ. ಇದರ ಜೊತೆಗೆ ‘ರಕ್ತ ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎನ್ನುವ ಮೂಲಕ ಸಿಂಧು ನೀರು ಪಾಕ್​ಗೆ ಹರಿಸುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದರು.
ಆರಂಭದಲ್ಲಿ ಪಹಲ್ಗಾಮ್ ದಾಳಿಯ ಉಲ್ಲೇಖ ಮಾಡಿದ ಮೋದಿ, ‘ಪ್ರವಾಸಕ್ಕೆಂದು ಬಂದಿದ್ದ ಅಮಾಯಕರನ್ನು ಅವರ ಕುಟುಂಬದ ಮುಂದೆ, ಅವರ ಪತ್ನಿ, ಮಕ್ಕಳ ಮುಂದೆ ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಯಿತು. ಇದು ಇಡೀ ದೇಶವಾಸಿಗಳ ನೆತ್ತರು ಕೆರಳಿಸಿತು. ಎಲ್ಲರೂ ಸಹ ಪ್ರತಿಕಾರಕ್ಕೆ ಒತ್ತಾಯ ಮಾಡಿದರು. ನಮ್ಮ ಸೇನೆಯು ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕ್​ನ ಭಯೊತ್ಪಾದಕ ಕೇಂದ್ರಗಳನ್ನು ಹೊಡೆದು ಉರುಳಿಸಿತು. ಭಯೋತ್ಪಾದನೆಯ ವಿಶ್ವವಿದ್ಯಾಲಯವೇ ಆಗಿದ್ದ ಕೆಲವು ಸ್ಥಳಗಳನ್ನು ಮಣ್ಣುಪಾಲು ಮಾಡಲಾಯ್ತು. ಈ ದಾಳಿಯಲ್ಲಿ ನೂರು ಮಂದಿ ಭಯೋತ್ಪಾದಕರು ನಿಧನ ಹೊಂದಿದ್ದಾರೆ. ಇವರು ವಿಶ್ವದಾದ್ಯಂತ ಭಯೋತ್ಪಾದನೆ ಕೃತ್ಯಗಳನ್ನು ಮಾಡಿದವರಾಗಿದ್ದರು’ ಎಂದಿದ್ದಾರೆ ಮೋದಿ.
ಭಾರತೀಯ ಸೇನೆಯ ಶೌರ್ಯವನ್ನು ಕೊಂಡಾಡಿದ ಮೋದಿ, ಭಾರತವು ‘ಆಪರೇಷನ್ ಸಿಂಧೂರ’ ಮೂಲಕ ತಮ್ಮ ಶಕ್ತಿ ಏನೆಂಬುದನ್ನು ವಿಶ್ವಕ್ಕೆ ತೋರಿಸಿದೆ. ನಾವು ಅತ್ಯಾಧುನಿಕ ಯುದ್ಧದಲ್ಲಿ ಪರಿಣಿತಿ ಹೊಂದಿದ್ದೀವಿ ಎಂಬುದಕ್ಕೆ ಆಪರೇಷನ್ ಸಿಂಧೂರ ಸಾಕ್ಷಿ. ಪಾಕಿಸ್ತಾನದ ಪ್ರತಿ ದಾಳಿಯನ್ನು ನಾವು ಆಕಾಶದಲ್ಲಿಯೇ ಪುಡಿ ಗಟ್ಟಿದ್ದೇವೆ. ವಿಶೇಷವಾಗಿ ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು ಈ ಆಪರೇಷನ್​​ನಲ್ಲಿ ಮುಖ್ಯ ಪಾತ್ರ ವಹಿಸಿದ್ದವು ಎಂದಿದ್ದಾರೆ.
ಟೆರರ್ ಮತ್ತು ಟಾಕ್, ಟೆರರ್ ಮತ್ತು ಟ್ರೇಡ್ ಒಟ್ಟೊಟ್ಟಿಗೆ ನಡೆಯುವುದು ಸಾಧ್ಯವಿಲ್ಲ. ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಏನೇ ಮಾತನಾಡುವುದಿದ್ದರೂ ಅದು ಭಯೋತ್ಪಾದನೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಯೇ ಆಗಿರುತ್ತದೆ ಎಂದಿದ್ದಾರೆ ನರೇಂದ್ರ ಮೋದಿ.
Exit mobile version