Darshan
ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಕೆಲ ದಿನಗಳ ಹಿಂದಷ್ಟೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಐದು ದಿನಗಳ ಕಾಲ ಮೈಸೂರಿಗೆ ಹೋಗಲು ಅನುಮತಿ ಕೇಳಿ ಮನವಿ ಮಾಡಿದ್ದರು. ದರ್ಶನ್ ಈಗ ಆರೋಪಿಯಾಗಿದ್ದು, ಅವರ ಪ್ರತಿ ಚಲನಲನದ ಮೇಲೆ ಪೊಲೀಸರ ನಿಗಾ ಇದೆ. ಇದರ ಜೊತೆಗೆ ಅವರು ಯಾವುದೇ ಹೊಸ ನಗರಕ್ಕೆ ಹೋಗಬೇಕೆಂದರೂ ಪೊಲೀಸರ ಅನುಮತಿ, ನ್ಯಾಯಾಲಯದ ಅನುಮತಿ ಬೇಕಾಗಿದೆ. ಈಗಾಗಲೇ ಪೊಲೀಸರು, ದರ್ಶನ್ಗೆ ನೀಡಿರುವ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಅದರ ಬೆನ್ನಲ್ಲೆ ಈಗ ದರ್ಶನ್ಗೆ ಪೊಲೀಸರು ಹೊಸ ನೊಟೀಸ್ ನೀಡಿದ್ದಾರೆ.
ಸೆಲೆಬ್ರಿಟಿ ಆಗಿರುವ ದರ್ಶನ್ ಈ ಹಿಂದೆ ತಮ್ಮ ಭದ್ರತೆಯ ಕಾರಣಕ್ಕೆ ಬಂದೂಕನ್ನು ಪಡೆದುಕೊಂಡಿದ್ದರು. ಇದು ಪರವಾನಗಿ ಹೊಂದಿದ ಬಂದೂಕಾಗಿದ್ದು, ದರ್ಶನ್ ಬಳಿ ಹಲವು ವರ್ಷಗಳಿಂದಲೂ ಈ ಬಂದೂಕು ಇತ್ತು. ಹಲವು ಮಂದಿ ಸೆಲೆಬ್ರಿಟಿಗಳು ಮತ್ತು ಅವರ ಭದ್ರತಾ ಸಿಬ್ಬಂದಿ ಹೀಗೆ ಪರವಾನಗಿ ಹೊಂದಿರುವ ಬಂದೂಕನ್ನು ಹೊಂದಿರುತ್ತಾರೆ. ಆದರೆ ಈಗ ಪೊಲೀಸರು ದರ್ಶನ್ಗೆ ನೊಟೀಸ್ ನೀಡಿದ್ದು ಆ ಬಂದೂಕನ್ನು ವಾಪಸ್ ಮಾಡುವಂತೆ ಹೇಳಿದ್ದಾರೆ.
ದರ್ಶನ್ ಕೊಲೆ ಆರೋಪಿ ಆಗಿದ್ದು, ಆರೋಪಿಯೊಬ್ಬನ ಬಳಿ ಬಂದೂಕು ಇರುವುದು ಸರಿಯಲ್ಲ ಎಂಬ ಕಾರಣಕ್ಕೆ ಪೊಲೀಸರು ದರ್ಶನ್ಗೆ ನೊಟೀಸ್ ನೀಡಿದ್ದಾರೆ. ಪೊಲೀಸರ ಸೂಚನೆಯಂತೆ ದರ್ಶನ್ ಬಂದೂರು ಹಿಂತಿರುಗಿಸುತ್ತಾರೆಯೇ ಅಥವಾ ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತಾರೆಯೇ ಕಾದು ನೋಡಬೇಕಿದೆ. ದರ್ಶನ್ ಒಂದೊಮ್ಮೆ ಬಂದೂಕು ವಾಪಸ್ ಮಾಡಿದರೆ ಅವರ ಭದ್ರತೆಯ ಸಮಸ್ಯೆ ಆಗುವ ಸಾಧ್ಯತೆ ಇದೆ.
Bigg Boss Kannada: ಈ ಬಾರಿ ಬಿಗ್ ಬಾಸ್ ಗೆಲ್ಲುವುದು ಯಾರು? ಈಗಾಗಲೇ ಆಗಿಬಿಟ್ಟಿದೆ ನಿರ್ಣಯ?
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ಗೆ ಕಳೆದ ತಿಂಗಳು ಜಾಮೀನು ದೊರೆತಿದೆ. ದರ್ಶನ್ ಇದೀಗ ಬೆನ್ನು ನೋವಿನಿಂದ ಬಳಲುತ್ತಿದ್ದು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಕೆಲವೇ ದಿನಗಳಲ್ಲಿ ತಮ್ಮ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ದರ್ಶನ್ ಜನವರಿ 25 ರಿಂದ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ.