Rachita Ram
ಬಿಗ್’ಬಾಸ್ ಗೆ ಹೋಗಿ ನಾಲಗೆ ಹರಿಬಿಟ್ಟು, ಸಹ ಸ್ಪರ್ಧಿಗಳೊಂದಿಗೆ ಜಗಳ ಮಾಡಿಕೊಂಡು ಹೊರಬಂದ ಜಗದೀಶ್ ಹೊರಗೆ ಬಂದ ಮೇಲೂ ತಮ್ಮ ವಾಚಾಳಿತನ ಮುಂದುವರೆಸಿದ್ದಾರೆ. ದರ್ಶನ್ ಪ್ರಕರಣದ ಬಗ್ಗೆ ಸೆಲ್ಫಿ ವಿಡಿಯೋ ಮಾಡಿ ಏನೇನೋ ಮಾತನಾಡಿದ್ದ ಲಾಯರ್ ಜಗದೀಶ್ ಆ ಸಂದರ್ಭದಲ್ಲಿ ನಟಿ ರಚಿತಾ ರಾಮ್ ಬಗ್ಗೆಯೂ ಮಾತನಾಡಿದ್ದರು. ಒದು ರಚಿತಾ ರಾಮ್’ಗೆ ಬೇಸರ ತರಿಸಿತ್ತು. ಇಂದು ಟಿವಿ9 ಗೆ ನೀಡಿರುವ ಸಂದರ್ಶನದಲ್ಲಿ ರಚಿತಾ ರಾಮ್ ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.
ಲಾಯರ್ ಜಗದೀಶ್ ಹೆಸರು ಹೇಳದೆ ಮಾತನಾಡಿದ ರಚಿತಾ ರಾಮ್, ‘ಅವರ ವಯಸ್ಸಿಗೆ ಮರ್ಯಾದೆ ಕೊಡುತ್ತಿದ್ದೇನೆ. ನನಗಿಂತಲೂ ಬಹಳ ದೊಡ್ಡವರು ಅವರು, ನನಗಿಂತಲೂ ಹೆಚ್ಚಿನ ಜೀವನಾನಾನುಭವ ಅವರಿಗೆ ಇದೆ. ಆದರೆ ಅವರು ನನ್ನ ಬಗ್ಗೆ ಏನೂ ಗೊತ್ತಿಲ್ಲದೆ ಅಂತೆ-ಕಂತೆ ಮಾತನಾಡುತ್ತಿದ್ದಾರೆ. ನನ್ನದು ತಪ್ಪು ಇದ್ದರೆ ನಾನೇ ಒಪ್ಪಿಕೊಳ್ಳುತ್ತೇನೆ. ನನ್ನ ತಪ್ಪು ಇಲ್ಲದಾಗ ಆ ದೇವರು ಮುಂದೆಯೂ ತಲೆ ಬಾಗಿಸಲ್ಲ’ ಎಂದು ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ ಡಿಂಪಲ್ ಕ್ವೀನ್.
‘ನಾನು ಕಳೆದ ಹತ್ತು ವರ್ಷಗಳಿಂದಲೂ ಈ ಚಿತ್ರರಂಗದಲ್ಲಿ ಇದ್ದೀನಿ. ನನಗೆ ನನ್ನದೇ ಆದ ಕೆಲಸ ಇವೆ. ಶೂಟಿಂಗ್’ನಲ್ಲಿ ಬ್ಯುಸಿಯಾಗಿ ಇರುತ್ತೀನಿ. ಶೂಟಿಂಗ್ ಇಲ್ಲದಾಗ ಕುಟುಂಬದೊಂದಿಗೆ ಸಮಯ ಕಳೆಯುತ್ತೀನಿ. ಅನವಶ್ಯಕವಾಗಿ ಯಾರೊಂದಿಗೂ ಮಾತನಾಡಲ್ಲ, ಮಾಧ್ಯಮಗಳ ಜೊತೆಗೂ ಮಾತನಾಡಲ್ಲ. ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತಿದ್ದೇನೆ. ನನ್ನ ಜೀವನದಲ್ಲಿ ನಾನು ಫೋಕಸ್ಡ್ ಆಗಿದ್ದೇನೆ. ಅನ್ಯರ ಅನುಪಯುಕ್ತ ಮಾತುಗಳಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ ರಚಿತಾ ರಾಮ್.
Allu Arjun: ಅಲ್ಲು ಅರ್ಜುನ್ ತುರ್ತು ಪತ್ರಿಕಾಗೋಷ್ಠಿ
‘ನೀವು ಮಾಧ್ಯಮದವರು ಸಹ ನನ್ನನ್ನು ಹತ್ತು ವರ್ಷಗಳಿಂದಲೂ ನೋಡಿದ್ದೀರಿ. ನೀವೇ ಹೇಳಿ ನಾನು ‘ಆ ರೀತಿಯ’ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೀನಾ’ ಎಂದು ಪ್ರಶ್ನೆ ಮಾಡಿದ ರಚಿತಾ ರಾಮ್, ‘ನಾನು ಎಂದಿಗೂ ಯಾವ ಮಾಧ್ಯಮದವರಿಗೂ ಕಾಲ್ ಮಾಡಿ ನನ್ನ ಪ್ರೋಗ್ರಾಂ ಮಾಡಿ ಎಂದಿಲ್ಲ, ನನಗೆ ಈ ಪ್ರಶ್ನೆ ಕೇಳಬೇಡಿ, ಈ ಪ್ರಶ್ನೆ ಕೇಳಿ ಎಂದು ಹೇಳಿಲ್ಲ. ಏನೋ ಹೇಳಿಬಿಟ್ಟು, ಆ ವಿಡಿಯೋ ಹಾಕಬೇಡಿ, ಈ ಹೇಳಿಕೆ ಹಾಕಬೇಡಿ ಎಂದು ಒತ್ತಡ ಹಾಕಿಲ್ಲ. ನನ್ನ ಪಾಡಿಗೆ ನಾನಿದ್ದೀನಿ. ಕೈ ತುಂಬ ಸಿನಿಮಾ ಇದೆ. ಅದನ್ನು ನನ್ನ ಪಾಡಿಗೆ ನಾನು ಮಾಡಿಕೊಂಡು ಹೋಗುತ್ತಿದ್ದೇನೆ, ಸುಮ್ಮನೆ ಕೆಲವರು ನನ್ನ ಹೆಸರು ತರುತ್ತಿದ್ದಾರೆ’ ಎಂದಿದ್ದಾರೆ ರಚಿತಾ ರಾಮ್.