Darshan Thoogudeepa: ಮುಂದುವರೆದ ದರ್ಶನ್ ಅಭಿಮಾನಿಗಳ ಹುಚ್ಚಾಟ, ಚಿತ್ರಮಂದಿರಕ್ಕೆ ಹಾನಿ

0
36
Darshan

Darshan Thoogudeepa

ನಟ ದರ್ಶನ್ ಅಭಿಮಾನಿಗಳ ಹುಚ್ಚಾಟದ ದರ್ಶನವನ್ನು ಕರ್ನಾಟಕದ ಜನ ಈಗಾಗಲೇ ಮಾಡಿದ್ದಾರೆ. ದರ್ಶನ್ ಜೈಲಿಗೆ ಹೋದಾಗ, ಅವರ ಅಭಿಮಾನಿಗಳು ಹೊರಗೆ ನಡೆದುಕೊಂಡ ರೀತಿ ಸಭ್ಯರಿಗೆ ಬೇಸರ ತರಿಸಿತ್ತು. ಕೊಲೆಯನ್ನು ಸಂಭ್ರಮಿಸುವ, ಪೊಲೀಸರು ಹಾಗೂ ಪತ್ರಕರ್ತರ ಮೇಲೆ ವಿಷಕಾರಿದ ರೀತಿ ಅವರ ದುರ್ವರ್ತನೆಗೆ ಸಾಕ್ಷಿಯಾಗಿತ್ತು. ದರ್ಶನ್, ಜೈಲಿನ ದರ್ಶನ ಮಾಡಿಕೊಂಡು ಮರಳಿದ ಬಳಿಕ ತುಸು ಶಾಂತವಾಗಿದ್ದಾರೆ. ಆದರೆ ಅವರ ಅಭಿಮಾನಿಗಳು ತಮ್ಮ ದುರ್ವರ್ತನೆ ಬಿಟ್ಟಿಲ್ಲ.

ಇಂದು, ದರ್ಶನ್ ಆಪ್ತ ಧನ್ವೀರ್ ಗೌಡ ನಟನೆಯ ‘ವಾಮನ’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ವತಃ ದರ್ಶನ್, ಟ್ರೈಲರ್ ಲಾಂಚ್ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದ್ದ ಕಾರಣ, ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಪ್ರಸನ್ನ ಚಿತ್ರಮಂದಿರದ ಒಳಗೆ ಸೇರಿಸಿದ್ದರು. ದರ್ಶಬ್ ಖುದ್ದಾಗಿ ಕಾರ್ಯಕ್ರಮಕ್ಕೆ ಬರಲಿಲ್ಲ, ಆದರೆ ಅವರು ಟ್ರೈಲರ್ ಬಿಡುಗಡೆ ಮಾಡಿದ ವಿಡಿಯೋ ಅನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯ್ತು.

ದರ್ಶನಗ ತೆರೆ ಮೇಲೆ ಕಾಣಿಸುತ್ತಿದ್ದಂತೆ ಸಹಜವಾಗಿ ಅಭಿಮಾನಿಗಳು ಕೂಗಾಟ, ಕಿರುಚಾಟ ನಡೆಸಿದರು. ಕುಂಬಳಕಾಯಿ ಆರತಿ ಸಹ ಮಾಡಿದರು. ಅದಾದ ಬಳಿಕ ನಟರಾದ ಧನ್ವೀರ್ ಗೌಡ, ‘ವಾಮನ’ ಸಿನಿಮಾದ ಇತರೆ ಚಿತ್ರತಂಡ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಆದರೆ ಕಾರ್ಯಕ್ರಮವೆಲ್ಲ‌ ಮುಗಿದ ಮೇಲೆ ದರ್ಶನ್ ರ ಅಭಿಮಾನಿಗಳು ತಮ್ಮ ಹುಚ್ಚಾಟ ಪ್ರದರ್ಶಿಸಿದರು. ಇದರಿಂದ ಚಿತ್ರಮಂದಿರಕ್ಕೆ ಹಾನಿ ಆಗಿದೆ.

ಪ್ರಸನ್ನ ಚಿತ್ರಮಂದಿರದ ಸಿಬ್ಬಂದಿ ಹೇಳಿರುವಂತೆ ಚಿತ್ರಮಂದಿರದ ಸೆಕೆಂಡ್ ಕ್ಲಾಸ್ ನ ಸುಮಾರು 80 ಸೀಟುಗಳನ್ನು ಕಿತ್ತು ಹಾಕಿದ್ದಾರೆ. ಬಾಲ್ಕನಿಯಲ್ಲಿದ್ದ 10 ಸೀಟುಗಳನ್ನು ಕಿತ್ತು ಹಾಕಿದ್ದಾರೆ. ಚಿತ್ರಮಂದಿರದ ಕಿಟಕಿ, ಬಾಗಿಲುಗಳಿಗೂ ಹಾನಿ ಮಾಡಿದ್ದಾರೆ. ನಾಳೆ ಶುಕ್ರವಾರ ಆಗಿದ್ದು ಪ್ರಸನ್ನ ಚಿತ್ರಮಂದಿರದಲ್ಲಿ ಹೊಸ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಈಗ ನೋಡಿದರೆ ಚಿತ್ರಮಂದಿರದ ಸೀಟುಗಳಿಗೆ ಹಾನಿ ಆಗಿದ್ದು, ನಾಳೆ ಸಿನಿಮಾ ಬಿಡುಗಡೆ ಹೇಗೆ ಮಾಡುವುದು ಎಂದು ಚಿತ್ರಮಂದಿರದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Rashmika Mandanna: ರಶ್ಮಿಕಾ ಮಂದಣ್ಣ ಆಸ್ತಿ ಮೌಲ್ಯ ಎಷ್ಟು,  9 ವರ್ಷದಲ್ಲಿ ಗಳಿಸಿದ ಹಣವೆಷ್ಟು?

ಅಂದಹಾಗೆ ‘ವಾಮನ’ ಸಿನಿಮಾದಲ್ಲಿ ಧನ್ವೀರ್, ರೀಷ್ಮಾ ನಾಣಯ್ಯ, ತಾರಾ, ಅಚ್ಯುತ್ ಕುಮಾರ್ ಅವರುಗಳು ನಟಿಸಿದ್ದಾರೆ. ಶಂಕರ್ ರಮನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚೇತನ್ ಗೌಡ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾ ಏಪ್ರಿಲ್ 10 ಕ್ಕೆ ಬಿಡುಗಡೆ ಆಗಲಿದೆ.

LEAVE A REPLY

Please enter your comment!
Please enter your name here