AIR FORCE: ಏರ್ ಫೋರ್ಸ್ ಗೆ ರಾಜ್ಯ ಸರ್ಕಾರ ಶಾಕ್, 444 ಎಕರೆ ವಶಕ್ಕೆ ಆದೇಶ, ಕೇಂದ್ರ vs ರಾಜ್ಯ ಶುರು

0
42
Air Force

AIR FORCE

ರಾಜ್ಯ ಸರ್ಕಾರ, ಏರ್ ಫೋರ್ಸ್ ಗೆ ಭರ್ಜರಿ ಶಾಕ್ ನೀಡಿದೆ. ಏರ್ ಫೋರ್ಸ್ ವಶದಲ್ಲಿರುವ ಬೆಂಗಳೂರಿ‌ನ ಪೀಣ್ಯ ಮತ್ತು ಜಾರಕಬಂಡೆ ಸಂರಕ್ಷಿತ ಅರಣ್ಯದ 444.12 ಎಕರೆ ಜಾಗವನ್ನು ವಶಕ್ಕೆ ಪಡೆಯುವಂತೆ ಆದೇಶ ಹೊರಡಿಸಿದೆ. ರಾಜ್ಯ ಅರಣ್ಯ ಖಾತೆ ಸಚಿವ ಸಚಿವ ಈಶ್ವರ ಖಂಡ್ರೆ, ಅರಣ್ಯ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಕೂಡಲೇ ಏರ್ ಫೋರ್ಸ್ ವಶದಲ್ಲಿರುವ ಅರಣ್ಯ ಪ್ರದೇಶವನ್ನು ಮರಳಿ ಪಡೆಯುವಂತೆ ಸೂಚನೆ ನೀಡಿದ್ದಾರೆ.

1987 ರಲ್ಲಿ 570 ಎಕರೆ ಜಾಗವನ್ನು ಭಾರತೀಯ ಸೇನೆಯ ಭಾಗವಾಗಿರುವ ವಾಯು ದಳ, ಏರ್ ಫೋರ್ಸ್ ಗೆ ನೀಡಲಾಗಿತ್ತು. ಬಳಿಕ 2017 ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿ 570 ಎಕರೆ ಜಾಗದಲ್ಲಿ 452 ಎಕರೆ ಪ್ರದೇಶವನ್ನು ಅರಣ್ಯವೆಂದು ಗುರುತಿಸಲಾಗಿದ್ದು, 452 ಎಕರೆ ಜಾಗದ ಅಲಾಟ್ ಮೆಂಟ್ ಅನ್ನು ರದ್ದುಗೊಳಿಸಿತ್ತು. 2017 ರ ಸರ್ಕಾರದ ಆದೇಶದಂತೆ ಮ್ಯುಟೇಷನ್ ಮಾಡಲಾಗಿದ್ದು, ಆ ಸ್ಥಳವು ಈಗ ಅಧಿಕೃತವಾಗಿ ಅರಣ್ಯ ಎಂದು ನೊಂದಣಿ ಆಗಿದೆ. ಈ ಮಾಹಿತಿಯನ್ನು ಈಗಾಗಲೇ ವಾಯುದಳದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅರಣ್ಯವೆಂದು ಗುರುತಿಸಲಾಗಿರುವ ಸ್ಥಳದಲ್ಲಿ ಬೋರ್ಡ್ ಗಳನ್ನು ಸಹ ಅಳವಡಿಸಲಾಗಿದೆ. ಇದರ ಜೊತೆಗೆ ಕೇಂದ್ರ ರಕ್ಷಣಾ ಮಂತ್ರಿ ಅವರಿಗೆ ಪತ್ರ ಬರೆದು ಅರಣ್ಯ ಪ್ರದೇಶವನ್ನು ಮರಳಿ ಸರ್ಕಾರದ ವಶಕ್ಕೆ ಒಪ್ಪಿಸುವಂತೆ ಕೋರಲಾಗಿದೆ‌ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ವಾಯುದಳವು ಮಾರ್ಚ್ 1 ರಂದು ಅರಣ್ಯವೆಂದು ಗುರುತಿಸಲಾಗಿರುವ ಸ್ಥಳದಲ್ಲಿ ಕಾಮಗಾರಿಗಳನ್ನು ಪ್ರಾರಂಭ ಮಾಡಿದೆ. 15 ಎಕರೆ ಪ್ರದೇಶದಲ್ಲಿ ಶೂಟಿಂಗ್ ರೇಂಜ್ ನಿರ್ಮಾಣ ಮಾಡಿದೆ. ಕೆಲವು ಸಣ್ಣ ಪುಟ್ಟ ಕಚೇರಿಗಳನ್ನು, ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಈ ನಿರ್ಮಾಣವು ಕಾನೂನು ಬಾಹಿರ ಆಗಿದ್ದು, ಕೂಡಲೆ ಕ್ರಮ ಕೈಗೊಳ್ಳುವಂತೆ ಸಚಿವ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ವಾಯು ದಳದ ಅಧಿಕಾರಿಗಳಿಗೆ ನೊಟೀಸ್ ನೀಡಿ ಕಾಮಗಾರಿ ನಿಲ್ಲಿಸಿದ್ದಾರೆ.

Dharmasthala: ಧರ್ಮಸ್ಥಳದ ಬಗ್ಗೆ ಹರಿದಾಡುತ್ತಿರುವ ವಿಡಿಯೋನಲ್ಲಿ ಸತ್ಯ ಎಷ್ಟಿದೆ?

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧಗಳು ಅಷ್ಟು ಹಿತಕಾರಿಯಾಗಿಲ್ಲ‌. ಈಗ ರಾಜ್ಯ ಸರ್ಕಾರ, ಏರ್ ಫೋರ್ಸ್ ಗೆ ನೀಡಿರುವ ನೊಟೀಸ್ ಅನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದ್ದು, ಕೇಂದ್ರದ ಪ್ರತಿಕ್ರಿಯೆ ಖಾರವಾಗಿಯೇ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ರಾಜ್ಯ ಸರ್ಕಾರದ ಮುಂದಿನ ನಡೆ ಏನಾಗಿರಲಿದೆ ಎಂಬುದು ಕುತೂಹಲ ಕೆರಳಿಸಿದೆ.

LEAVE A REPLY

Please enter your comment!
Please enter your name here