Kumbh Mela: ಕುಂಭಮೇಳ: ತ್ರಿವೇಣಿಯ ನೀರು ಸ್ನಾನ ಮತ್ತು ಸೇವಿಸಲು ಯೋಗ್ಯವೇ?

0
47

Kumbh Mela

ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರಯಾಗ್ ರಾಜ್​ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ದೇಶ, ವಿದೇಶದ ಕೋಟ್ಯಂತರ ಜನ ಮಹಾಕುಂಭ ಮೇಳಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಮಾಡಿದ್ದಾರೆ. ಈ ವರೆಗೆ ಸುಮಾರು 50 ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರಂತೆ. ಆದರೆ ತ್ರಿವೇಣಿ ಸಂಗಮದ ನೀರು ಅಂದರೆ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ನೀರು ಕುಡಿಯಲು ಮಾತ್ರವೇ ಅಲ್ಲದೆ ಸ್ನಾನ ಮಾಡಲು ಸಹ ಯೋಗ್ಯವಲ್ಲ ಎಂದು ವರದಿ ಹೇಳುತ್ತಿದೆ.

ನ್ಯಾಷನಲ್ ಗ್ರೀನ್ ಟ್ರಿಬ್ಯೂಟ್, ಸೆಂಟ್ರಲ್ ಪೊಲ್ಲುಷನ್ ಕಂಟ್ರೋಲ್ ಬೋರ್ಡ್ (ಸಿಪಿಸಿಬಿ) ನೀಡಿರುವ ವರದಿಯ ಪ್ರಕಾರ ತ್ರಿವೇಣಿ ಸಂಗಮದಲ್ಲಿನ ನೀರು ಕುಡಿಯಲು ಹಾಗೂ ಸ್ನಾನ ಮಾಡಲು ಯೋಗ್ಯವಲ್ಲವಂತೆ. ಕುಂಭ ಮೇಳದ ಸಮಯದಲ್ಲಿ ಸಂಗಮದಲ್ಲಿನ ನೀರಿನ ಗುಣಮಟ್ಟ ತೀವ್ರತರವಾಗಿ ಕುಸಿದಿದ್ದು ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳ ಸಂಖ್ಯೆ ಅತೀವವಾಗಿ ಹೆಚ್ಚಾಗಿದೆಯಂತೆ. ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾದ ಫೇಕಲ್ ಕ್ಯಾಲಿಫೋರಂ ಬ್ಯಾಕ್ಟಿರಿಯಾ ಆ ನೀರಿನಲ್ಲಿ ಹೆಚ್ಚಾಗಿದ್ದು, ಅಪಾಯಕಾರಿ ಮಟ್ಟ ಮುಟ್ಟಿದೆಯಂತೆ. 100 ಮಿಲಿಲೀಟರ್​ಗೆ 2500 ಯುನಿಟ್ ಬ್ಯಾಕ್ಟೀರಿಯಾಗಳು ಪತ್ತೆ ಆಗುತ್ತಿವೆ ಎಂದಿದೆ ಸಿಪಿಸಿಬಿ ವರದಿ.

Pakistan: ಬರ್ಬಾದ್ ಆಗಿದ್ದ ಪಾಕಿಸ್ತಾನಕ್ಕೆ ಹೊಡೆದಿದೆ ಜಾಕ್ ಪಾಟ್, ಅದೃಷ್ಟವೋ ಅದೃಷ್ಟ

ಮನುಷ್ಯ ಅಥವಾ ಇನ್ಯಾವುದೇ ಬಿಸಿ ರಕ್ತದ ಪ್ರಾಣಿಯ ಮಲದಲ್ಲಿ ಕಂಡುಬರುವ ಸೂಕ್ಷ್ಮಜೀವಿಗಳ ಸಾಲಿಗೆ ಸೇರುತ್ತದೆ ಫೇಕಲ್ ಕ್ಯಾಲಿಫೋರಂ, ಇದೇ ಸೂಕ್ಷ್ಮ ಜೀವಿ ಈಗ ಸಂಗಮದ ನೀರಿನಲ್ಲಿ ದೊಡ್ಡ ಮಟ್ಟದಲ್ಲಿ ಪತ್ತೆಯಾಗುತ್ತಿವೆ. ಕೋಟ್ಯಂತರ ಜನರು ಆ ನೀರಿನಲ್ಲಿ ಸ್ನಾನ ಮಾಡಿರುವ ಕಾರಣಕ್ಕೆ ಹಾಗೂ ನಗರದ ಚರಂಡಿ ನೀರು ಇನ್ನಿತರೆ ತ್ಯಾಜ್ಯವನ್ನು ಅದೇ ನೀರಿನಲ್ಲಿ ಬಿಟ್ಟಿರುವ ಕಾರಣಕ್ಕೆ ಸಂಗಮದ ನೀರು ಅತ್ಯಂತ ಕಲುಷಿತ ಆಗಿದೆ ಎಂದಿದೆ ವರದಿ.

ಆದರೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಈ ವರದಿಯನ್ನು ತಳ್ಳಿ ಹಾಕಿದ್ದು, ಸಂಗಮದ ನೀರು ಕುಡಿಯಲು ಯೋಗ್ಯವಾಗಿದೆ ಎಂದಿದ್ದಾರೆ. ಅಲ್ಲದೆ ಉತ್ತರ ಪ್ರದೇಶ ಪರಿಸರ ಇಲಾಖೆಯೂ ಸಹ ಸಂಗಮದ ನೀರು ಶುದ್ಧವಾಗಿದೆ ಎಂದು ವರದಿಯೊಂದನ್ನು ಪ್ರಕಟಿಸಿದೆ. ಆದರೆ ಸಿಪಿಸಿಬಿ ಆ ವರದಿಯನ್ನು ಅಲ್ಲಗಳೆದಿದ್ದು, ವರದಿ ಸಂಪೂರ್ಣವಾಗಿಲ್ಲ ಎಂದಿದೆ. ಮಾತ್ರವಲ್ಲದೆ ಕೆಲವು ಪತ್ರಿಕೆಗಳು, ವಿಪಕ್ಷದ ಕೆಲವು ನಾಯಕರು, ಯೋಗಿ ಆದಿತ್ಯನಾಥರು ಹೇಳುವಂತೆ ಗಂಗಾ ನೀರು ಕುಡಿಯಲು ಯೋಗ್ಯವಾಗಿದ್ದರೆ ಅವರೇ ಅದನ್ನು ಕುಡಿದು ತೋರಿಸಲಿ ಎಂದು ಸವಾಲು ಸಹ ಹಾಕಿದ್ದಾರೆ.

LEAVE A REPLY

Please enter your comment!
Please enter your name here