Maharashtra
ಭಾರತದಲ್ಲಿ ರೈತರ ಸ್ಥಿತಿ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಹೀನಾಯವಾಗಿದೆ. ಕೇಂದ್ರ, ರಾಜ್ಯ ಎಲ್ಲ ಸರ್ಕಾರಗಳು ರೈತರ ಸ್ಥಿತಿಯನ್ನು ಉತ್ತಮಪಡಿಸುವುದಾಗಿ, ರೈತರ ಆದಾಯವನ್ನು ಮೂರು ಪಟ್ಟು ಮಾಡುವುದಾಗಿ ಭರವಸೆ ನೀಡಿ ಓಟು ಗಿಟ್ಟಿಸಿಕೊಂಡು ಗೆದ್ದರೇ ವಿನಃ ಹೇಳಿಕೆಗಳು ಕಾರ್ಯರೂಪಕ್ಕೆ ಬರಲಿಲ್ಲ. ರೈತರು ವರ್ಷದಿಂದ ವರ್ಷಕ್ಕೆ ಇನ್ನಷ್ಟು ಬಡವಾಗುತ್ತಾ ಸಾಗುತ್ತಿದ್ದಾರೆ. ಮಹಾರಾಷ್ಟ್ರದಲ್ಲಂತೂ ರೈತರ ಸ್ಥಿತಿ ಹೀನಾಯವಾಗಿಬಿಟ್ಟಿದೆ. ವರದಿಯಂತೆ ಸರಾಸರಿ ಪ್ರತಿದಿನ ಎಂಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಅಲ್ಲಿನ ರಾಜ್ಯ ಸರ್ಕಾರ ಎನ್ನಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಪ್ರತಿದಿನ 8 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ವರದಿಯನ್ನು ಈಗಿನ ಸಚಿವರೇ ಒಪ್ಪಿಕೊಂಡಿದ್ದು, ವರದಿ ಸರಿಯಾಗಿದೆ ಎಂದಿದ್ದಾರೆ. ಕಳೆದ 56 ತಿಂಗಳಲ್ಲಿ ಅಂದರೆ ಸುಮಾರು ಕಳೆದ ವರ್ಷಗಳಲ್ಲಿ ಪ್ರತಿದಿನ ಸರಾಸರಿ 8 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಕೇವಲ ಮಹಾರಾಷ್ಟ್ರ ರಾಜ್ಯದಲ್ಲಿ. ಅಂದರೆ ಈ ಐದು ವರ್ಷಗಳಲ್ಲಿ ಸುಮಾರು 14,600 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಿದೆ ವರದಿ.
ಈಗ ಮಾತ್ರವಲ್ಲ ಮಹಾರಾಷ್ಟ್ರದಲ್ಲಿ ಮೊದಲಿನಿಂದಲೂ ರೈತರ ಆತ್ಮಹತ್ಯೆ ಹೆಚ್ಚು. 1995 ರಿಂದ 2013ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 60 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮತ್ತೆ ಅದೇ ರೀತಿ ರಾಜ್ಯದಲ್ಲಿ ಸರಣಿ ರೈತ ಆತ್ಮಹತ್ಯೆಗಳು ನಡೆಯುತ್ತಿವೆ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಉದ್ಯಮ ಪರ ಮತ್ತು ರೈತ ವಿರೋಧಿ ನೀತಿಗಳೇ ಹೀಗೆ ರೈತರ ಸರಣಿ ಆತ್ಮಹತ್ಯೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
Pakistan: ಪಾಕಿಸ್ತಾನದ ಶ್ರೀಮಂತ ಹಿಂದು ಈತ, ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೆ?
ನೀರಿನ ಅಭಾವ, ಬೆಳೆದ ಬೆಳೆಗೆ ಪೂರಕ ಬೆಲೆ ಸಿಗದೇ ಹೋಗುತ್ತಿರುವುದು. ಸರ್ಕಾರದಿಂದ ಸಿಗದ ಬೆಂಬಲ ಇನ್ನಿತರೆ ಕಾರಣಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಮಹಾರಾಷ್ಟ್ರ ರೈತರು ಸಲ್ಲಿಸಿರುವ 4 ಲಕ್ಷಕ್ಕೂ ಹೆಚ್ಚಿನ ಬೆಳೆ ವಿಮೆ ಕಳೆದ ಒಂದೇ ವರ್ಷದಲ್ಲಿ ನಿರಾಕರಿಸಲ್ಪಟ್ಟಿದೆ ಎಂದು ವರದಿಯೊಂದು ಹೇಳಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿ ವಿಮೆಗಾಗಿ ಸಲ್ಲಿಸಲಾಗಿದ್ದ ಮಹಾರಾಷ್ಟ್ರ ರೈತರ 4.30 ಲಕ್ಷ ವಿಮೆ ಅರ್ಜಿಗಳನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಇದು ಸಹ ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.