Siddaramaiah
ರಾಜ್ಯ ರಾಜಕಾರಣದಲ್ಲಿ ಹಲ್ ಚಲ್ ಶುರುವಾಗಿದೆ. ಆಡಳಿತ ಪಕ್ಷದ ಕೆಲ ಶಾಸಕರು ಹಾಗೂ ಸಚಿವರ ಡಿನ್ನರ್ ಪಾರ್ಟಿ ಪೊಲಿಟಿಕ್ಸ್ ರಾಜ್ಯದಲ್ಲಿ ರಾಜಕೀಯ ಅತಂತ್ರತೆ ಸೃಷ್ಟಿಸುವ ಸೂಚನೆ ನೀಡಿದೆ. ಸಿದ್ದರಾಮಯ್ಯ ತಮ್ಮ ಆಪ್ತ ಶಾಸಕರು, ಸಚಿವರ ಸಭೆ ನಡೆಸಿದ್ದು, ಈಗ ಅಹಿಂದ ಶಾಸಕರು, ಸಚಿವರ ಡಿನ್ನರ್ ಪಾರ್ಟಿ ನಡೆಯಲು ಸಮಯ ನಿಗದಿ ಆಗಿತ್ತು. ಇದರ ಬೆನ್ನಲ್ಲೆ ಡಿಕೆ ಶಿವಕುಮಾರ್, ಹೈಕಮಾಂಡ್ ಅನ್ನು ಭೇಟಿ ಆಗಿದ್ದು, ಸಿದ್ದರಾಮಯ್ಯ ಅವರ ಡಿನ್ನರ್ ಪಾರ್ಟಿ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.
ದೆಹಲಿಗೆ ತೆರಳಿದ್ದ ಡಿಕೆ ಶಿವಕುಮಾರ್, ಕಾಂಗ್ರೆಸ್ ಮುಖಂಡ ಕೆ ವೇಣುಗೋಪಾಲ್ ಜೊತೆಗೆ 45 ನಿಮಿಷಗಳ ಕಾಲ ಸಭೆ ನಡೆಸಿದ್ದು, ಈ ವೇಳೆ ಸಿದ್ದರಾಮಯ್ಯ ಅವರ ಡಿನ್ನರ್ ಪಾರ್ಟಿ ಪಾಲಿಟಿಕ್ಸ್ ವಿರುದ್ಧ ದೂರು ನೀಡಿದ್ದು, ಇದೇ ಕಾರಣಕ್ಕೆ ಪರಮೇಶ್ವರ್, ಸತೀಶ್ ಜಾರಕಿಹೊಳಿ ಮುಂದಾಳತ್ವದಲ್ಲಿ ನಡೆಯಬೇಕಿದ್ದ ಡಿನ್ನರ್ ಪಾರ್ಟಿ ರದ್ದಾಗಿದೆ ಎನ್ನಲಾಗುತ್ತಿದೆ.
ಡಿನ್ನರ್ ಪಾರ್ಟಿ ವಿಷಯವನ್ನು ರಣದೀಪ್ ಸುರ್ಜೆವಾಲಾ ಅವರ ಗಮನಕ್ಕೂ ತರಲಾಗಿದ್ದು, ರಾಜ್ಯದ ಯಾವ ಕಾಂಗ್ರೆಸ್ ಮುಖಂಡರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಪಟ್ಟಿಯನ್ನು ಸಹ ಹೈಕಮಾಂಡ್ ಗೆ ಡಿಕೆ ಶಿವಕುಮಾರ್ ನೀಡಿದ್ದು ಮಾತ್ರವೇ ಅಲ್ಲದೆ. ಅವರುಗಳ ಮೇಲೆ ನಿಗಾವಣೆ ಇಡಲು ಸೂಚಿಸಿದ್ದಾರೆ. ಹೈಕಮಾಂಡ್ ಸಹ ಕೆಲವು ಸಚಿವರಿಗೆ ಎಚ್ಚರಿಕೆ ನೀಡಿದ್ದು, ನಡೆಯಬೇಕಿದ್ದ ಒಂದು ಡಿನ್ನರ್ ಪಾರ್ಟಿಯನ್ನು ರದ್ದು ಮಾಡಿಸಿದೆ.
King Fisher: ತೆಲಂಗಾಣದ ಜನರಿಗೆ ಇನ್ನು ಮುಂದೆ ಸಿಗಲ್ಲ ಕಿಂಗ್ ಫಿಶರ್ ಬಿಯರ್: ಕಾರಣ?
ರಾಜ್ಯದ ರಾಜಕಾರಣ ತುಸು ಬಿಸಿ ಏರಿದೆ. ರಾಕ್ಯದಲ್ಲಿ ಮತ್ತೊಮ್ಮೆ ಬಣ ರಾಜಕೀಯ ಗರಿಗೆದರಿದೆ. ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಹಾಗೂ ಸಿಎಂಸಿದ್ದರಾಮಯ್ಯ ನಡುವೆ ಪವರ್ ಪಾಲಿಟಿಕ್ಸ್ ಶುರುವಾಗಿದೆ. ಇಬ್ಬರೂ ಸಹ ತಮ್ಮ ತಮ್ಮ ಬಣಗಳನ್ನು ಗಟ್ಟಿಗೊಳಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಕೆಲವು ಸಚಿವರು ಮತ್ತು ಶಾಸಕರು ಡಿಕೆ ಶಿವಕುಮಾರ್ ಪರವಾಗಿ ನಿಂತಿದ್ದರೆ ಇನ್ನು ಕೆಲವರು ಸಿದ್ದರಾಮಯ್ಯ ಪರವಾಗಿ ನಿಂತಿದ್ದಾರೆ. ಸತೀಶ್ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡಿ, ಡಿಕೆ ಶಿವಕುಮಾರ್ ಅವರ ಪ್ರಾಮುಖ್ಯತೆಯನ್ನು ಕಡಿಮೆಗೊಳಿಸುವ ಇರಾದೆ ಸಿದ್ದರಾಮಯ್ಯ ಬಣಕ್ಕೆ ಇದ್ದಂತೆ ಇದೆ. ಇದರ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದು, ಒಬ್ಬ ವ್ಯಕ್ತಿ ಎರಡು ಸ್ಥಾನ ನಿರ್ವಹಿಸುತ್ತಿರುವ ಬಗ್ಗೆಯೂ ಅಅಧಾನ ಕೇಳಿ ಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಸಹೋದರ ಡಿಕೆ ಸುರೇಶ್ ಅವರನ್ನು ಕೂರಿಸುವ ಕಾರ್ಯ ದಲ್ಲಿ ಡಿಕೆ ಶಿವಕುಮಾರ್ ನಿರತರಾಗಿದ್ದಾರೆ.