Sudeep: ಡಿಕೆಶಿಗೆ ಢಿಚ್ಚಿ ಕೊಟ್ಟ ಸುದೀಪ್ ಆಪ್ತ, ಆದರೆ ಮುಂದಿದೆಯೇ ಮಾರಿ ಹಬ್ಬ?

0
43
Sudeep

Sudeep

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಚಿತ್ರರಂಗದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ‘ನಮ್ಮಿಂದ ಸಹಾಯ ಪಡೆದು ಮೂಲೆಗೆ ಬಿಸಾಕುತ್ತಾರೆ, ಯಾರ ನಡೆ ಏನಿದೆ ಎಂಬುದು ಗೊತ್ತಾಗುತ್ತಾ ಇರುತ್ತದೆ‌. ಯಾರಿಗೆ ಎಲ್ಲಿ ಹೇಗೆ ನೆಟ್ಟು ಬೋಲ್ಟು ಟೈಟ್ ಮಾಡಬೇಕು ಎಂಬುದು ಗೊತ್ತಿದೆ’ ಎಂದಿದ್ದರು. ಡಿಕೆಶಿಯ ಮಾತಿಗೆ ಹಲವರು ಬೇರೆ ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುದೀಪ್ ಗೆ ಆಪ್ತವಾದ, ಮಾಜಿ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಡಿಕೆಶಿಗೆ ಢಿಚ್ಚಿ ಕೊಟ್ಟಿದ್ದಾರೆ.

ಫೇಸ್ ಬುಕ್ ನಲ್ಲಿ ಲೈವ್ ಬಂದು ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್, ಡಿಕೆ ಶಿವಕುಮಾರ್ ಅವರು ಚಿತ್ರರಂಗದವರ ಬಗ್ಗೆ ಆಡಿದ ಮಾತುಗಳನ್ನು ಖಂಡಿಸಿರುವುದು ಮಾತ್ರವಲ್ಲದೆ, ಡಿಕೆಶಿಯನ್ನು ಪುಡಿ ರೌಡಿಗಳಿಗೆ ಹೋಲಿಕೆ ಮಾಡಿದ್ದಾರೆ. ‘ಉಪ ಮುಖ್ಯಮಂತ್ರಿ ಆಗಿಯೇ ಇಷ್ಟು, ಸಿಎಂ ಆಗಿಬಿಟ್ಟರೆ ಹಿಟ್ಲರ್ ಆಗಿ ಬಿಡುತ್ತೀರ ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್.

ಚಲನಚಿತ್ರೋತ್ಸವವನ್ನು ದುಡ್ಡು ಹೊಡೆಯಲು ಮಾಡಿರುವ ಕಾರ್ಯಕ್ರಮ ಎಂದು ಟೀಕೆ ಮಾಡಿರುವ ಚಂದ್ರಚೂಡ್, ಸರ್ಕಾರ ನೂರು ಕಾರ್ಯಕ್ರಮ ಮಾಡುತ್ತೆ ಎಲ್ಲ ಕಾರ್ಯಕ್ರಮಕ್ಕೂ ನಟರು ಬರೋಕೆ ಆಗುತ್ತಾ? ಹೋಗಲಿ ಎಷ್ಟು ನಟರಿಗೆ ಆಹ್ವಾನ ಕೊಟ್ಟಿದ್ದಿರಿ? ನೀವು ಅಧಿಕಾರಕ್ಕೆ ಬರುವ ಮುಂಚೆ ಮಾಡಿದ ಕಾರ್ಯಕ್ರಮಕ್ಕೆ ನಟರು ಬರಲಿಲ್ಲ ಡಂದು ಅಧಿಕಾರಕ್ಕೆ ಬಂದ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿರುವುದು ದ್ವೇಷ ರಾಜಕಾರಣ ಎಂದು ಟೀಕೆ ಮಾಡಿದ್ದಾರೆ ಚಕ್ರವರ್ತಿ ಚಂದ್ರಚೂಡ್.

ಸುದೀಪ್, ರಾಜ್ಯ ಪ್ರಶಸ್ತಿ ನಿರಾಕರಣೆ ಮಾಡಿರುವುದನ್ನು ಟೀಕೆ ಮಾಡಿದ್ದನ್ನು ಟೀಕೆ ಮಾಡಿರುವ ರವಿ ಅವರ ಬಗ್ಗೆ ಮಾತನಾಡಿ, ಸುದೀಪ್ ಪ್ರಶಸ್ತಿ ನಿರಾಕರಣೆ ಮಾಡಲು ಅವರದ್ದೇ ಕಾರಣ ಇದೆ. ಈ ಹಿಂದೆ ಪ್ರಶಸ್ತಿ ಕೊಡುತ್ತೇನೆ ಎಂದು ಹೇಳಿ ಕೊಟ್ಟಿರಲಿಲ್ಲ, ಸರ್ಕಾರ ಎಂದರೆ ಅಸಹ್ಯ ಬಂದು ಹೋಗಿದೆ ಹಾಗಾಗಿ ಸುದೀಪ್ ಪ್ರಶಸ್ತಿ ನಿರಾಕರಣೆ ಮಾಡಿದ್ದಾರೆ. ಸುಮ್ಮನೆ ಚಿತ್ರರಂಗದವರನ್ನು ಬೈಯ್ಯುವ ಕೆಲಸ ಮಾಡಬಾರದು ಎಂದಿದ್ದಾರೆ. ಚಂದ್ರಚೂಡ್.

Niveditha Gowda: ನಿವೇದಿತಾ ಗೌಡಗೆ ಹಣ ಎಲ್ಲಿಂದ ಬರುತ್ತದೆ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುದೀಪ್, ಬಿಜೆಪಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ರಾಜ್ಯದಾದ್ಯಂತ ರ್ಯಾಲಿ ಮಾಡಿ‌ ಬಿಜೆಪಿ ಅಭ್ಯರ್ಥಿಗಳ ಪರ ಮತ ಕೇಳಿದ್ದರು. ಆ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಸುದೀಪ್ ಜೊತೆಗೆ ಚಕ್ರವರ್ತಿ ಚಂದ್ರಚೂಡ್ ಸಹ ಇದ್ದರು. ಈಗ ಸುದೀಪ್ ಪರವಹಿಸಿ ಮಾತನಾಡುವ ಭರದಲ್ಲಿ ಡಿಕೆ ಶಿವಕುಮಾರ್ ಬಗ್ಗೆ ನಾಲಗೆ ಹರಿಬಿಟ್ಟಿದ್ದಾರೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here